ಚಾಲಕ ನಾಗಪ್ಪ ನಿರ್ವಾಹಕ ಸೂರ್ಯಕಾಂತ ವಗ್ಗಾಲೆಯವರ ದಶಕದ ಕನ್ನಡ ಪ್ರೇಮ.

ಅಫಜಲಪೂರ: ಅಫಜಲಪೂರ ಬಸ್ಸ ಘಟಕದ ಚಾಲಕರಾದ ನಾಗಪ್ಪ ಉಪ್ಪಿನ ನಿರ್ವಾಹಕರಾದ ಸೂರ್ಯಕಾಂತ ವಗ್ಗಾಲೆ ಅಪ್ಪಟ ಕನ್ನಡಾಂಬೆ ಮಕ್ಕಳೆಂದು ವಿಭಾಗೀಯ ನಿಯಂತ್ರಣಾಧಿಕಾರಿಯಾದ ಸುನೀಲಕುಮಾರ ಚಂದರಿಗಿಯವರು ನಿನ್ನೆ ಕನ್ನಡ ರಾಜ್ಯೋತ್ಸವದ ನಿಮಿತ್ಯ ಅಫಜಲಪೂರ ಘಟಕದ ನಾಗಪ್ಪ ಮತ್ತು ಸೂರ್ಯಕಾಂತ ವಗ್ಗಾಲೆ 10 ವರ್ಷಗಳಿಂದ ತಮ್ಮ ಸಂತ ಖರ್ಚಿನಲ್ಲಿ ಸಾವಿರಾರೂ ರೂಪಾಯಿಗಳನ್ನು ತಮಗೆ ಅನ್ನ ನೀಡುವ ಬಸ್ಸಗೆ ಒಳ್ಳೆ ಮದುವಣಗಿತ್ತಿಯಂತೆ ಅಂಲಕಾರ ಮಾಡಿರುವ ಬಸ್ಸಿಗೆ ಸುನೀಲಕುಮಾರ ಚಂದರಿಗಿಯವರು ಪೊಜೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು. ಬಸ್ಸಿಗೆ ಎರಡು ಬದಿಗೆ ದ್ವನಿವರ್ದಕಗಳನ್ನು ಅಳುವಡಿಸಿದ್ದು ಬಸ್ಸಿನ ಕಿಟಕಿಗಳು ಕನ್ನಡ ಕವಿಗಳ ಭಾವಚಿತ್ರಗಳಿಂದ ಕಂಗೊಳಿಸುತ್ತಿತ್ತು. ಅಫಜಲಪೂರನಿಂದ ಕಲಬುರಗಿಗೆ ಬರುವಾಗ ದಾರಿಯುದ್ದಕ್ಕೂ ಅಂಲಕಾರಗೊಂಡ ಬಸ್ಸಿನ್ನು ಜನರು ಆರ್ತಿಯೆತ್ತಿ ಸ್ವಾಗತಿಸಿದರು.ಸುನಿಲಕುಮಾರ್ ಚಂದರಗಿ,
ವಿಭಾಗೀಯ ನಿಯಂತ್ರಣಾಧಿಕಾರಿ,
ರವೀಂದ್ರಕುಮಾರ ಡಿಗ್ಗಿ,
ವಿಭಾಗೀಯ ಸಂಚಾರ ಅಧಿಕಾರಿ,
ಶ್ರೀಮತಿ ಶಾರದಾದೇವಿ,
ಕಾರ್ಮಿಕ ಕಲ್ಯಾಣಾಧಿಕಾರಿ,
ವೆಂಕಟೇಶ್ ಜನಾದ್ರಿ,
ಸಹಾಯಕ ಲೆಕ್ಕಧಿಕಾರಿ,
ಶಾಂತರೆಡ್ಡಿ,
ಸಹಾಯಕ ಕಾರ್ಯನಿರ್ವಾಹಕರು,
ಮಲ್ಲಿನಾಥ ಸರಂಸಬಿ,
ಸಹಾಯಕ ಅಂಕಿ ಸಂಖ್ಯಾಧಿಕಾರಿ
ಕೃಷ್ಣ ಪವಾರ,
ನಿಲ್ದಾಣಾಧಿಕಾರಿ,
ರವಿ ಕುಲಕರ್ಣಿ,
ವಿ. ನಿ ಆಪ್ತ ಸಹಾಯಕರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.











