January 15, 2026 9:15 am

ಕ.ಕ. ಬಸ್‌ಗಳಲ್ಲಿ ಡಿಜಿಟಲ್ ಟಿಕೆಟ್ ಜಾರಿಗೊಳಿಸಿ ಕಾನೂನು ವಿದ್ಯಾರ್ಥಿನಿ ನೆಹಾ ಎಸ್. ನಾಟೇಕರ್ ಆಗ್ರಹ

ಕ.ಕ. ಬಸ್‌ಗಳಲ್ಲಿ ಡಿಜಿಟಲ್ ಟಿಕೆಟ್ ಜಾರಿಗೊಳಿಸಿ ಕಾನೂನು ವಿದ್ಯಾರ್ಥಿನಿ ನೆಹಾ ಎಸ್. ನಾಟೇಕರ್ ಆಗ್ರಹ

 

📍 ಭಾಲ್ಕಿ, ಅಕ್ಟೋಬರ್ 27:

ಭಾಲ್ಕಿಯ ಬಿಎ ಎಲ್‌ಎಲ್‌ಬಿ ಕಾನೂನು ವಿದ್ಯಾರ್ಥಿನಿ ನೆಹಾ ಸಂತೋಷ್. ನಾಟೇಕರ್ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಬಸ್‌ಗಳಲ್ಲಿ ಕ್ಯಾಶ್‌ಲೆಸ್ ಟಿಕೆಟ್ ಸಿಸ್ಟಮ್ (ಡಿಜಿಟಲ್ ಪಾವತಿ ವ್ಯವಸ್ಥೆ) ಶೀಘ್ರ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

 

ರಾಜ್ಯದ ಇತರ ಸಾರಿಗೆ ನಿಗಮಗಳಲ್ಲಿ ಯುಪಿಐ, ಫೋನ್‌ಪೇ, ಗೂಗಲ್‌ಪೇ, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿ ಸೌಲಭ್ಯ ದೊರಕುತ್ತಿದ್ದರೆ, ಕೆಕೆಆರ್‌ಟಿಸಿಯಲ್ಲಿ ಇನ್ನೂ ನಗದು ಪಾವತಿ ಪ್ರಕ್ರಿಯೆ ಮುಂದುವರಿದಿರುವುದು ಪ್ರಯಾಣಿಕರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.

 

ನೆಹಾ ಹೇಳಿದರು – “ಡಿಜಿಟಲ್ ಯುಗದಲ್ಲಿ ಪ್ರಯಾಣಿಕರು ಚಿಲ್ಲರೆ ಹಣಕ್ಕಾಗಿ ತೊಂದರೆ ಅನುಭವಿಸಬಾರದು. QR ಕೋಡ್ ಅಥವಾ ಯುಪಿಐ ಪಾವತಿ ಸೌಲಭ್ಯ ಜಾರಿಯಾದರೆ ಸಮಯ ಉಳಿತಾಯ, ಪಾರದರ್ಶಕತೆ ಮತ್ತು ಸುರಕ್ಷತೆ ಹೆಚ್ಚುತ್ತದೆ. ಜೊತೆಗೆ ಭ್ರಷ್ಟಾಚಾರ ತಡೆಯಲು ಸಹಕಾರಿ ಆಗುತ್ತದೆ.”

 

ಅವರು ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಭಾಲ್ಕಿ ತಹಶೀಲ್ದಾರ್ ಮುಖಾಂತರ ಅಧಿಕೃತ ಮನವಿ ಸಲ್ಲಿಸಿದ್ದು, “ಡಿಜಿಟಲ್ ಇಂಡಿಯಾ” ಅಭಿಯಾನಕ್ಕೆ ಕೈಜೋಡಿಸುವ ದೃಷ್ಟಿಯಿಂದ ಈ ಕ್ರಮ ಅತ್ಯಂತ ಅಗತ್ಯ ಎಂದು ತಿಳಿಸಿದ್ದಾರೆ.

 

ಪ್ರಯಾಣಿಕರಿಂದಲೂ ನೆಹಾ ಅವರ ಈ ಆಗ್ರಹಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು “ಪ್ರತಿದಿನ ಬಸ್‌ನಲ್ಲಿ ಚಿಲ್ಲರೆ ತೊಂದರೆ, ವಿಳಂಬ ಮತ್ತು ಲೆಕ್ಕದ ಸಮಸ್ಯೆ ಎದುರಾಗುತ್ತದೆ. ಡಿಜಿಟಲ್ ಪಾವತಿ ಬಂದರೆ ಎಲ್ಲರಿಗೂ ಸುಲಭವಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೆಹಾ ನಾಟೇಕರ್ ಅವರ ಈ ಮುಂದಾಳತ್ವ ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿ, ಡಿಜಿಟಲ್ ಅರಿವು ಮತ್ತು ಸಾರ್ವಜನಿಕ ಸೇವೆಯ ಬದ್ಧತೆ ಹೆಚ್ಚಿಸುವ ಮಾದರಿಯಾಗಿದೆ ಎಂದು ನಾಗರಿಕರು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

और पढ़ें

best news portal development company in india

Cricket Live Score

Corona Virus

Rashifal

और पढ़ें